ನಾಡು ನುಡಿ ಕಟ್ಟಿದವರು ಪುಸ್ತಕ ಸರಣಿ - ಶ್ರೀ ವೀರೇಂದ್ರ ಪಾಟೀಲ್.
ನಾಡು ನುಡಿ ಕಟ್ಟಿದವರು ಪುಸ್ತಕ ಸರಣಿ ಶ್ರೀ ವೀರೇಂದ್ರ ಪಾಟೀಲ್ (ಜೀವನ ಮತ್ತು ಸಾಧನೆ) ನಾಡು ಕಂಡ ಶ್ರೇಷ್ಠ ರಾಜಕಾರಣಿ, ಚತುರ ಸಂಸದೀಯ ಪಟು, ಧೀಮಂತ ನಾಯಕ, ಕರ್ನಾಟಕದ ಹೆಮ್ಮೆ ಶ್ರೀ ವೀರೇಂದ್ರ ಪಾಟೀಲರು ತಮ್ಮ ಜೀವನವನ್ನು ನಾಡು ನುಡಿ ರಕ್ಷಣೆಗಾಗಿ, ರೈತ – ಕಾರ್ಮಿಕರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟವರು. ಪಕ್ಷ ಸಂಘಟನೆಯ ಜೊತೆ ಜೊತೆಗೆ ತಮ್ಮನ್ನು ನಂಬಿ ಆಯ್ಕೆ ಮಾಡಿದ ಜನರ ಕುರಿತು ಸದಾ ಚಿಂತಿಸುತ್ತಾ ಅವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದವರು. ಇವರ ಕಾಲದಲ್ಲಿ ನಾಡಿನ ಹಲವು ನೀರಾವರಿ ಯೋಜನೆಗಳು, ಕಾರ್ಖಾನೆಗಳು ಪ್ರಾರಂಭವಾದದ್ದು ಪಾಟೀಲರ ದೂರದೃಷ್ಠಿತ್ವಕ್ಕೆ ಒಂದು ಉದಾಹರಣೆ. ತಮ್ಮ ಸ್ವಪ್ರಯತ್ನ, ಪ್ರತಿಭೆ, ನಿಷ್ಠಾವಂತಿಕೆ, ನಿಷ್ಠುರತೆ, ಪ್ರಾಮಾಣಿಕತೆ, ಶುದ್ಧತೆ, ಸಜ್ಜನಿಕೆ, ವಿಚಾರಪರತೆ, ನಿಸ್ವಾರ್ಥ, ಜನಪರ ಚಿಂತನೆ, ಸದ್ಗುಣ, ಜನೊಪಯೋಗಿ, ಜನ ಕಲ್ಯಾಣ ಗುಣ ಮತ್ತು ಕಾರ್ಯಗಳಿಂದಾಗಿ ಶ್ರೀ ವೀರೇಂದ್ರ ಪಾಟೀಲರ ಹೆಸರು ಕರ್ನಾಟಕ ಮತ್ತು ರಾಷ್ಟ್ರದ ರಾಜಕೀಯ ಇತಿಹಾಸ ಚಿರಸ್ಥಾಯಿಯಾಗಿ ಉಳಿದಿದೆ. ಇಂತಹ ಧೀಮಂತ ನಾಯಕರ ವೈಯಕ್ತಿಕ ಬದುಕು, ಸೇವೆ, ಸಾಧನೆ ಇತ್ಯಾದಿಗಳನ್ನು ಹಾಗೂ ಮಾನ್ಯರು ನಾಡು - ನುಡಿಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವುದು ಈ ಲೇಖನದ ಉದ್ದೇಶ. ಶ್ರೀ ವೀರೇಂದ್ರ ಪಾಟೀಲರು ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಚಿಂಚೋಳಿ ತಾಲೂಕಿನ ಹೂಡದಳ್ಳಿ ಎಂಬ ಗ್ರಾಮದ ಶ್ರೀ ಬಸಪ್ಪಾ ಮತ್ತು ಚೆನ್ನಮ್ಮರ ೩ ನೇ ...