ಹಾಗೆ ಸುಮ್ಮನೆ
ಒಂದು ಕತೆ ಇದೆ. ರಾಮಾನುಜಾಚಾರ್ಯರ ಹೆಸರಿನಲ್ಲಿ... ರಾಮಾನುಜಾಚಾರ್ಯರು ತಮ್ಮ ಗುರುಗಳ ಹತ್ತಿರ ಹಲವು ವರ್ಷಗಳು ಇದ್ದು ಅವರ ಸೇವೆ ಮಾಡಿ ಕೊನೆಗೆ ಒಂದು ದಿನ ಗೌಪ್ಯ ಮಂತ್ರವೊಂದರ ಉಪದೇಶ ಪಡೆದುಕೊಂಡರಂತೆ. ಮಂತ್ರೋಪದೇಶ ಮಾಡಿದ ಗುರುಗಳು " ಸರಿಯಾಗಿ ನೆನಪಿನಲ್ಲಿ ಇಡು, ಈ ಮಂತ್ರವನ್ನ ನೀನು ಎಂದಿಗೂ ಬಾಯಿಬಿಟ್ಟು ಹೇಳಬಾರದು. ಹೇಳಿದಾಗ ಇದನ್ನ ಯಾರಾದರೂ ಕೇಳಿಸಿಕೊಂಡುಬಿಟ್ಟರೆ ಅವರು ಸತ್ತಮೇಲೆ ನೇರ ಸ್ವರ್ಗಕ್ಕೆ ಹೋಗ್ತಾರೆ ನೀನು ಮಾತ್ರ ಸೀದಾ ನರಕಕ್ಕೆ ಹೋಗ್ತೀಯ" ಅಂತ ಹೇಳಿದರಂತೆ. ಇದನ್ನ ಕೇಳಿಸಿಕೊಂಡ ರಾಮಾನುಜರು " ಗುರುಗಳೇ ಇದು ನಿಜವಾ?, ಇದನ್ನ ಕೇಳಿಸಿಕೊಂಡವರೆಲ್ಲ ನಿಜವಾಗಿ ನೇರವಾಗಿ ಸ್ವರ್ಗಕ್ಕೆ ಹೋಗ್ತಾರಾ !" ಅಂತ ಕೇಳಿದ್ರಂತೆ. ಅದಕ್ಕೆ ಗುರುಗಳು ಖಂಡಿತ ಹೌದು. ಅಂತ ಹೇಳಿದ್ದೇ ತಡ ಸೀದಾ ಶ್ರೀರಂಗಂ ನ ದೇವಸ್ಥಾನದ ದೊಡ್ಡ ಗೋಪುರ ಹತ್ತಿ ಅದರ ಮೇಲಿಂದ " ಓಂ ನಮೋ ನಾರಾಯಣಾಯ" ಅಂತ ಕೂಗಿ ಕೂಗಿ ಹೇಳೋಕೆ ಶುರು ಮಾಡಿದ್ರಂತೆ. ಗುರುಗಳಿಗೆ ಮತ್ತೆ ಅಲ್ಲಿದ್ದ ಉಳಿದ ಅರ್ಚಕರು ಇವರಿಗೆಲ್ಲ ಕೋಪ, ಆಶ್ಚರ್ಯ ಒಂದೇ ಸಲಕ್ಕೆ. ರಾಮಾನುಜರು ಕೂಗೋ ಅಷ್ಟೂ ಕೂಗಿ ಸಮಾಧಾನ ಆದಮೇಲೆ ಕೆಳಗೆ ಇಳಿದು ಬಂದರಂತೆ. ಆಗ ಗುರುಗಳು " ಲೋ ಮೂರ್ಖ, ನಾನು ಮೊದಲೇ ಹೇಳಿಲ್ವಾ. ಇದನ್ನ ಯಾರಿಗೂ ಹೇಳಬಾರದು, ಹೇಳಿದರೆ ನೀನು ಸೀದಾ ನರಕಕ್ಕೆ ಹೋಗ್ತೀಯ. ಕೇಳುಸಿಕೊಂಡವರು ಸ್ವರ್ಗಕ್ಕೆ ಹೋಗ್ತಾರೆ ಅಂತ. ಎಂತ ಕೆಲಸ ಮಾಡಿಬಿಟ್ಟ...