ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಒಂದು ಅವಲೋಕನ- ವರುಣ್ ರಾಜ್ ಜೀ.
ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಒಂದು ಅವಲೋಕನ - ವರುಣ್ ರಾಜ್ ಜೀ. ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಾ ಬಂದಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಹಿಂದೆ ಬಹಳ ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಯೋಗ್ಯ ನಾಗರೀಕರನ್ನು ಸಿದ್ಧಪಡಿಸುವ, ವ್ಯವಹಾರ ಜ್ಞಾನ ಒದಗಿಸುವ, ಸಾಮಾನ್ಯ ಶಿಕ್ಷಣ ಹಾಗೂ ಗೀತ, ವಾದ್ಯ, ನೃತ್ಯ, ಮುಂತಾದ ೬೪ ಕಲೆಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮ ಪ್ರಾಚೀನ ಕೃತಿಗಳಲಿ ಉಲ್ಲೇಖವಿದೆ. ಹಲವು ಕಸುಬುಗಳನ್ನು ಗುರುಮುಖದಿಂದ ಕಲಿಯುವ, ಕಲಿಸುವ ವ್ಯವಸ್ಥೆ ಭಾರತದಲ್ಲಿ ಇತ್ತು. ಉನ್ನತ ಶಿಕ್ಷಣಕ್ಕಾಗಿ ತಕ್ಷಶಿಲ, ನಳಂದ, ಹಾಗೂ ಕರ್ನಾಟಕದ ನಾಗಾವಿ, ಬಳ್ಳಿಗಾವೆ ಮುಂತಾದ ಕಡೆ ಪ್ರಾಚೀನ ವಿದ್ಯಾ ಕೇಂದ್ರಗಳು ಇದ್ದದರ ಕುರಿತು ನಮಗೆ ಶಾಸನಾಧಾರಗಳು ಸಿಗುತ್ತವೆ. ಭಾರತದಲ್ಲಿ ೧೯೮೬ ರಿಂದ ಚಾಲ್ತಿಯಲ್ಲಿದ ಶಿಕ್ಷಣ ನೀತಿಯ ಮಿತಿಗಳನ್ನು ವಿಸ್ತಾರಗೊಳಿಸುವ ಹಾಗೂ ಲೋಪದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ತರಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕೇಂದ್ರ ಕ್ಯಾಬಿನೆಟ್ ನಲ್ಲಿ ಅನುಮೋದನೆಗೊಂಡು ಹಲವಾರು ಪರ ವಿರೋಧ ಚರ್ಚೆಗಳಿಗೆ ಆ ಮೂಲಕ ಕೆಲವು ಗೊಂದಲಗಳಿಗೆ ಕಾರಣವಾಗಿದೆ. ಕರ್ನಾಟಕವು ಮೊದಲ ರಾಜ್ಯವಾಗಿ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕೆಂದಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ....